ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 14 April 2015

ಒಲುಮೆಯ ಮುದ್ದುವಿಗೆ: ಪತ್ರ - ೪


ಪತ್ರ - ೪
-----------

ಒಲುಮೆಯ ಮುದ್ದುಗೆ,

ಅರಿವಾಗದ ಮೌನದೊಳುಹರಿವ ಧ್ಯಾನದೊಳುನಿನ್ನೊಲವಿನೊರತೆ ಹೃದಯದಿಂದ ಚಿಗಿದುಪುಟಿದು ಕಳೆಗಟ್ಟುತ್ತಿದೆ. ಜಿನುಗಿದ ಒಲವನ್ನು ಚೇಸು ಮಾಡುವ ಧಾವಂತಕ್ಕೆ ಬೀಳುತ್ತೇನೆ. ಆಹಾ! ನನ್ನ ಚಲನೆಯನ್ನು ನಿನಗೆ ನಿರೂಪಿಸುವೆ ಕೇಳುಮಜವಿದೆ. ನಿನ್ನ ಕಣ್ಣೊಳಗಿಂದ ಪುಟಿದ ಒಲವು ಗುಂಡಗೆ ಗೋಳಾಕಾರ ಪಡೆಯುತ್ತದೆಉರುಳುತ್ತದೆ. ಒಂದು ಆಯಕಟ್ಟಿನ ಜಾಗ ನೋಡಿ ತಣ್ಣಗೆ ನಿಂತುಬಿಡುತ್ತದೆ. 'ನನಗೊಂದು ಕೋಲು ಕೊಡಿಭೂಮಿಯನ್ನು ಉರುಳಿಸುತ್ತೇನೆಎಂದ ಆರ್ಕಿಮಿಡೀಸ್ ಒಂದು ರೀತಿಯ ಬೆರಗು ಹುಟ್ಟಿಸುತ್ತಾನೆ. ನಾನೂ ಒಲವನ್ನು ನಡೆಸಲು ಸನ್ನೆ ಹುಡುಕುವೆಆಗ ನಡೆದ ಅಚ್ಚರಿಗಳ ಒಟ್ಟು ಮೊತ್ತವೇ ಈ ಪತ್ರ. ಸ್ವಲ್ಪ ಕಾವ್ಯಾತ್ಮಕವಾಗಿಸಲು ಪ್ರಯತ್ನಿಸಿದ್ದೇನೆನನ್ನ ಆರ್ಟಿಫಿಶಿಯಲ್ ಭಾಷೆಯನ್ನು ಸಹಿಸಿಕೋ!

ಆ ಗೋಳಾಕಾರದ ಒಲವು ಥೇಟು ಸಕ್ಕರೆ ಪಾಕದಲದ್ದಿದಂತೆ ಸವಿಪಾಕವನ್ನು ಸುರಿಸುತ್ತಿದೆ. ನಿಂತ ನಿಲುವಲ್ಲೇ ಕರಗುವ ಐಸ್ಕ್ರೀಮಿನಂತೆ. ಅಲ್ಲಿಂದ್ಹೊರಟ ಒಂದು ಬಿಂದು ಉರುಳಿಉರುಳಿ ಬಿದ್ದು ಕುಡಿಯೊಡೆದು ಹೂವಾಗುತ್ತದೆಹೂವು ಸಿಹಿಯಾಗುತ್ತದೆ. ನಿರ್ಜೀವ ಹೂವು ಫಳ ಫಳ ಹೊಳೆದುಗಾಳಿಗೆ ಗಂಧ ಪೂಸಿಮದುವಣಗಿತ್ತಿಯಾಗಿದೆ. ಚಕಿತ ಕ್ಷಣಗಳ ಹಿಡಿಯಲಾಗದೆಮನ ಚೂರು ಹೊಡೆದು ಬಣ್ಣವಾಗಿದುಂಬಿಚಿಟ್ಟೆಯಾಗಿ ಹೂವನ್ನು ಮುತ್ತುತ್ತಿದೆ. ಮೈಲಿಗೆಯ ಮಿತಿ ಮೀರಿದ ಇದಕೆ ವಿಜ್ಞಾನಿಗಳು ಪರಾಗವೆಂದು ಕರೆದುಬಿಟ್ಟರು. ಹುಟ್ಟುಗಳಿಗೊಂದ್ಹುಟ್ಟು ಕೊಟ್ಟ ಗೋಳ ತನ್ನ ಕಣ್ಣೊರಳಿಸುತ್ತಿದೆ. ಪರಾಗ ನಿರಂತರ ಮತ್ತು ನಿರಾತಂಕ! ಹೂವಿನ ಜಾಡು ಅರಸಿ ಹಾರಿ ಬರುವ ಪಕ್ಷಿಗಳಿಗೂ ಚಿಲಿಪಿಲಿಗುಟ್ಟುವುದನ್ನು ಕಲಿಸುತ್ತಿದೆ ಹೂವ ಗಂಧ. ಒಂದರ ಹೂವ ಕೇಸರಗಳು ಮತ್ತೊಂದಕೆ ಬೆಸೆದು ತರಹೇವಾರಿ ಹೂವುಗಳು ಜೀವತಳೆಯುತ್ತವೆ. ಬಣ್ಣಗಳು ಭಾವತಳೆಯುತ್ತವೆ. ಭೂಮಿ ಜೀವಂತವಾಗುತ್ತದೆ.

ನಿನಗೊಂದು ನಿಜ ಗೊತ್ತಾ ಮುದ್ದುಎಲ್ರೂ ಹೇಳ್ತಾರೆಭೂಮಿ ನಿಂತಿರೋದೆ ಗುರುತ್ವದ ಮೇಲೆಇನ್ನೂ ಕೆಲವರು ಹೇಳ್ತಾರೆ ಭೂಮಿ ನಿಂತಿರೋದು ನಂಬಿಕೆ ಮೇಲೆನಾನು ಹೇಳ್ತೇನೆ, 'ಈ ದುಂಡಾದ ಭೂಮಿ ನಿಂತರೋದು ನಿನ್ನೊಲವ ಮೇಲೆ', ಅದರ ಸೃಷ್ಟಿಯ ಕಾರಣವೂ ನಿನ್ನೊಲವೇಗುಂಡಾದ ಒಲವ ಚಲನೆಗೂ ನಿನ್ನ ಕಣ್ಣೋಟವೇ ಸನ್ನೆ. ಅಷ್ಟೂ ಒಲವನ್ನು ನನ್ನೆದೆಯೊಳಗೆ ಬಚ್ಚಿಟ್ಟುಜೀವನ ಪರ್ಯಂತ ನಿನಗೆ ಎಡೆಯಿಡುತ್ತಿದ್ದೇನೆ. ನಿನ್ನ ಕನಸುಗಳಿಗೆ ರೆಕ್ಕೆಯಾಗುತಿದ್ದೇನೆಸ್ವೀಕರಿಸೆನ್ನ ಒಲವ ಪೂಜೆಗೆ.

ಎಂದೆಂದೂ ನಿನ್ನವನೇ ಆದ,
ಪ್ರಸಾದ್ (ನಿನ್ನ ಮೈಸೂರು)

1 comment:

  1. ಒಲವೇ ಅಸಲೀ ಗುರುತ್ವಾಕರ್ಷಣಾ ಯೋಗ!

    ReplyDelete